ತಾಲೂಕು ಸುದ್ದಿ

ಧರ್ಮಸ್ಥಳ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ

ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ ಹಾಗೂ 39 ನೇ ವರ್ಧಂತ್ಯುತ್ಸವದ ಅಂಗವಾಗಿ ತೋರಣ ಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದು, ಫೆ.೩ ರಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯಿತು.
ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಕಳ ಜೈನಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಪೂಜ್ಯ ನಿರ್ವಾಣ ಸಾಗರ ಕ್ಷುಲ್ಲಕ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ ಆಗ್ರೋದಕ ಮೆರವಣಿಗೆ, ಬಳಿಕ ೨೧೬ ಕಲಶಗಳಿಂದ ಶ್ರೀ ಸ್ವಾಮಿಯ ಪಾದಾಭಿಷೇಕ ನಡೆಯಿತು.
ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಹಾಗೂ ವಿವಿಧ ದ್ರವ್ಯಗಳಾದ ಕಲ್ಕಚೂರ್ಣ, ಎಳನೀರು, ಅರಶಿನ, ಶ್ರೀಗಂಧ, ಚಂದನ, ಕ್ಷೀರ, ಇಕ್ಷು ರಸ, ಅಕ್ಕಿ ಹಿಟ್ಟು ಮೊದಲಾದ ಮಂಗಳ ದ್ರವ್ಯಗಳಿಂದ ಪಾದಾಭಿಷೇಕ ನಡೆಸಲಾಯಿತು. ಪುಷ್ಪವೃಷ್ಟಿ ಬಳಿಕ ಮಹಾ ಮಂಗಳಾರತಿ ಹಾಗೂ ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ, ಸೋನಿಯಾ ವರ್ಮ, ಪೂರಣ್‌ವರ್ಮ, ಭರತ್‌ರಾಜ್ ಮೊದಲಾದವರು ಪಾದಾಭಿಷೇಕ ಮಾಡಿದರು.

ನಿಮ್ಮದೊಂದು ಉತ್ತರ